ವೀಕ್ಷಕರೇ ಇಲ್ಲಿ ನೋಡಿ … ನಿಮಗೂ ಈ ಯೋಜನೆಯ ಭಾಗ್ಯ ಸಿಗಬಹುದು ….. ನಿಮ್ಮ ಮನೆಯಲ್ಲಿನ ಮಹಿಳೆಯರು ಆರ್ಥಿಕವಾಗಿ ಸಾವಲಂಬಿಗಳಾಗಲು ಸರ್ಕಾರ ಹೊಸ ಯೋಜನೆಯನ್ನು ಜಾರಿಗೆ ತಂದಿದೆ ಈ ಯೋಜನೆಯ ಫಲಾನುಭವಿಗಳು ನೀವು ಆಗಬೇಕಾ ಹಾಗಾದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಿ ಅರ್ಜಿ ಸಲ್ಲಿಸಲು ಕೊನೆಯಲ್ಲಿ ಲಿಂಕ್ ನೀಡಲಾಗಿದೆ ಅದರ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ .
Karnataka Free Sewing Machine Scheme
ಈ ಯೋಜನೆಗೆ ಯಾರು ಅರ್ಹರು:-
ಸರ್ಕಾರವು ರಾಜ್ಯದ ಹಿಂದುಳಿದ ವರ್ಗದ ಮಹಿಳೆಯರಿಗೆ ಉಚಿತ ವಿದ್ಯುತ್ ಹೊಲಿಗೆ ಯಂತ್ರಗಳನ್ನು ವಿತರಿಸಲು ಡಿ. ದೇವರಾಜ ಅರಸು ನಿಗಮದ ಮೂಲಕ ವಿಶೇಷ ಯೋಜನೆಯನ್ನು ಘೋಷಿಸಿದೆ. ಮಹಿಳೆಯರು ಮನೆಯಲ್ಲೇ ಸ್ವಂತ ಉದ್ಯೋಗವನ್ನು ಪ್ರಾರಂಭಿಸಿ, ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಲು ಸಹಾಯ ಮಾಡುವ ನಿಟ್ಟಿನಲ್ಲಿ ಈ ಒಂದು ಹೊಸ ಯೋಜನೆಯನ್ನು ಜಾರಿಗೆ ತರಲಾಗಿದೆ.
ಈ ಯೋಜನೆಗೆ ಯಾರು ಅರ್ಹರು :-
ಈ ಯೋಜನೆಯನ್ನು ವಿವಿಧ ಜಾತಿ ವರ್ಗಗಳಿಗೆ ನೀಡಲಾಗುತ್ತಿದ್ದು ಈ ಕೆಳಗೆ ಅದರ ಮಾಹಿತಿಯನ್ನು ನೀಡಲಾಗಿದೆ. 2A, 3A, 3B, SC/ST ಸಮುದಾಯದವರು (ವಿಶ್ವಕರ್ಮ, ಉಪ್ಪಾರ, ಲಿಂಗಾಯತ, ಒಕ್ಕಲಿಗ, ಮುಂತಾದವರಿಗೆ ಅನ್ವಯಿಸುವುದಿಲ್ಲ). ಅಷ್ಟೇ ಅಲ್ಲದೆ ಕುಟುಂಬದ ವಾರ್ಷಿಕ ಆದಾಯವನ್ನು ಸಹ ಇಲ್ಲಿ ಪರಿಗಣಿಸಲಾಗುತ್ತದೆ ಅದರ ಬಗ್ಗೆ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು ಅಬೆರ್ಥಿಗಳು ಅದನ್ನು ಗಮನಿಸಬಹುದು.
ಗ್ರಾಮೀಣ: ₹98,000/ವರ್ಷಕ್ಕಿಂತ ಕಡಿಮೆ
ನಗರ: ₹1.2 ಲಕ್ಷ/ವರ್ಷಕ್ಕಿಂತ ಕಡಿಮೆ ಇರುವಂಥ ಅಭ್ಯಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ವಯಸ್ಸು: 18–55 ವರ್ಷ ಒಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಅರ್ಹರು
ಪೂರ್ವ ಲಾಭ: ಇದೇ ನಿಗಮದ ಇತರ ಯೋಜನೆಗಳ ಲಾಭ ಪಡೆದವರಿಗೆ ಅರ್ಹತೆ ಇಲ್ಲ.
ಬೇಕಾಗುವ ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್ (ಬ್ಯಾಂಕ್ ಲಿಂಕ್ ಆಗಿರಬೇಕು)
- ಜಾತಿ & ಆದಾಯ ಪ್ರಮಾಣಪತ್ರಗಳು
- ಬ್ಯಾಂಕ್ ಪಾಸ್ಬುಕ್ ಕಾಪಿ
- ಪಾಸ್ಪೋರ್ಟ್ ಗಾತ್ರದ ಫೋಟೋ
- ಹೊಲಿಗೆ ತರಬೇತಿ ಪ್ರಮಾಣಪತ್ರ (ಇದ್ದರೆ)
ಈ ಮೇಲೆ ಕಾಣಿಸಿದ ಅಗತ್ಯ ದಾಖಲೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು .
ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ :-
ಸೇವಾ ಸಿಂಧು ಪೋರ್ಟಲ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿಯನ್ನು ಸಲ್ಲಿಸಬೇಕು.
ಲಾಗಿನ್ ಮಾಡಿ (ಆಧಾರ್/ಮೊಬೈಲ್ ಸಂಖ್ಯೆಯೊಂದಿಗೆ). ನಂತರ
“ಉಚಿತ ಹೊಲಿಗೆ ಯಂತ್ರ ಯೋಜನೆ” ಅರ್ಜಿಯನ್ನು ಆಯ್ಕೆಮಾಡಿ.
ವಿವರಗಳನ್ನು ಭರ್ತಿ ಮಾಡಿ, ದಾಖಲೆಗಳನ್ನು ಅಪ್ಲೋಡ್ ಮಾಡಿ.
ಸಲ್ಲಿಸಿದ ಅರ್ಜಿಯ ಪ್ರತಿಯನ್ನು ಡೌನ್ಲೋಡ್ ಮಾಡಿ.
ಇಷ್ಟು ಮಾಡಿದರೆ ಸಾಕು ನೀವು ಹೊಲಿಗೆ ಯಂತ್ರವನ್ನು ಉಚಿತವಾಗಿ ಸರ್ಕಾರದಿಂದ ಪಡೆದುಕೊಳ್ಳಬಹುದು ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ.
ಇತರೆ ಸರ್ಕಾರಿ ಪ್ರಮುಖ ಯೋಜನೆಗಳ ಮಾಹಿತಿ ನೋಡಿ :-
- ಪಿಎಂ ಕಿಸಾನ್ ಯೋಜನೆಗೆ ₹12,000 ಸಹಾಯಧನ?
- ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ
- ಸುಕನ್ಯ ಸಮೃದ್ಧಿ ಯೋಜನೆ ಕೇಂದ್ರ ಸರ್ಕಾರಿ ಯೋಜನೆ
- ಕರ್ನಾಟಕ ರಾಜ್ಯದ ರೈತರಿಗಾಗಿ ಬೀಜದ ಭತ್ತ ಸಬ್ಸಿಡಿ ಯೋಜನೆ 2025