ಪ್ರತಿಯೊಬ್ಬ ರೈತರು ಗಮನಿಸಬೇಕಾದ ಪ್ರಮುಖ ಮಾಹಿತಿ ಈ ಮಾಹಿತಿಯನ್ನು ನೀವು ತಿಳಿದುಕೊಂಡು ಕಾರ್ಯರೂಪಕ್ಕೆ ತಂದರೆ ಕಂಡಿತಾ ಆರ್ಥಿಕವಾಗಿ ರೈತರು ಸದೃಢರಾಗಬಹುದು ಇದರ ಬಗ್ಗೆ ತಿಳಿಸಿಕೊಡ್ತಿನಿ ಈ ಮಾಹಿತಿಯನ್ನು ಎಲ್ಲ ರೈತರಿಗೂ ಶೇರ್ ಮಾಡಿ ಹಾಗೂ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ಕೆಳೆಗೆ ಕಾಣಿಸುವ ಟೆಲಿಗ್ರಾಮ್ ಗೆ ಜಾಯಿನ್ ಆಗಿ…
Black Pepper farming in Karnataka
ಕಾಳುಮೆಣಸಿನ ಕೃಷಿಯನ್ನು ಪ್ರತಿಯೊಬ್ಬ ರೈತರು ಮಿಶ್ರ ಬೇಸಾಯ ಮಾಡೋದ್ರಿಂದ ಆರ್ಥಿಕವಾಗಿ ಸದೃಢರಾಗಬಹುದು ಈ ಕೃಷಿಯನ್ನು ಮಾಡುವ ವಿಧಾನ ಈ ಕೆಳಗಿನಂತಿದೆ .
ಕಾಳು ಮೆಣಸಿನ ಕೃಷಿಗೆ ಹವಾಮಾನ ಹೇಗಿರಬೇಕು :-
ಕಾಳುಮೆಣಸಿನ ಕೃಷಿ ಮಾಡಬೇಕು ಅಂದ್ರೆ ಸೂಕ್ತ ಹವಾಮಾನ ಬೇಕಾಗುತ್ತದೆ ಉಷ್ಣವಲಯದ ಹಾಗೂ ಉಪೋಷ್ಣವಲಯದ ಹವಾಮಾನ (20°C – 35°C)
ಮಣ್ಣು ಹೇಗಿರಬೇಕು :-
ಸಾರವತ್ತಾದ, ಜೌಗು ಅಲ್ಲದ ಮತ್ತು ನೀರು ಚೆನ್ನಾಗಿ ಬಸಿದು ಹೋಗುವ ಕೆಂಪು ಮಣ್ಣು ಅಥವಾ ಕಪ್ಪು ಮಣ್ಣು (pH 5.5 – 6.5).
ಇದನ್ನು ಓದಿರಿ .. ಕಾಳು ಮೆಣಸು: ಒಂದು ಎಕರೆ, ಲಕ್ಷಾಂತರ ಲಾಭ!
ವಾತಾವರಣ ಹೇಗಿರಬೇಕು :-
ವಾರ್ಷಿಕ 150-250 cm ಮಳೆ ಅಥವಾ ನೀರಾವರಿ ಸೌಲಭ್ಯ ಇರಬೇಕಾಗುತ್ತದೆ
ಯಾವ ಪ್ರದೇಶದಲ್ಲಿ ಕೃಷಿ ಮಾಡಲು ಹೆಚ್ಚು ಸೂಕ್ತ :-
ಕಾಳುಮೆಣಸಿನ ಕೃಷಿ ಮಾಡಲು ಸೂಕ್ತವಾದ ಹವಾಮಾನ ಪ್ರದೇಶ ಕರ್ನಾಟಕದಲ್ಲಿ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ದಕ್ಷಿಣ ಕನ್ನಡ ಜಿಲ್ಲೆಗಳು ಯೋಗ್ಯವಾಗಿವೆ.
ಲಭ್ಯವಿರುವ ತಳಿಗಳು :-
Panniyur-1, Subhakara, Sreekara, Panchami (ಭಾರತದಲ್ಲಿ ಸಾಮಾನ್ಯ).
Karimunda, Kottanadan, Aimpiriyan (ದಕ್ಷಿಣ ಭಾರತದ ಸ್ಥಳೀಯ ಜಾತಿಗಳು).
ನಾಟಿಮಾಡುವ ವಿಧಾನ :-
ನಾಟಿಮಾಡುವ ವಿಧಾನದ ಬಗ್ಗೆ ಈ ಕೆಳಗೆ ಹಂತ ಹಂತವಾಗಿ ಮಾಹಿತಿಯನ್ನು ನೀಡಲಾಗಿದೆ
ಸಸಿ ತಯಾರಿಕೆ: ಬೀಜಗಳು ಅಥವಾ ಕಾಂಡದ ಕತ್ತರಿಸಿದ ತುಂಡುಗಳಿಂದ (ಕಟಿಂಗ್ಸ್) ಸಸಿ ಮಾಡಲಾಗುತ್ತದೆ.
ನಾಟಿ ಸಮಯ: ಜೂನ್-ಜುಲೈ (ಮಳೆಗಾಲದ ಆರಂಭ).
ನಡುವಳಿ:
ಗಿಡಗಳ ನಡುವೆ 3-4 ಮೀಟರ್ ಅಂತರ.
50 cm × 50 cm × 50 cm ಗುಂಡಿಗಳನ್ನು ತೋಡಿ, ಸಾವಯವ ಗೊಬ್ಬರ ಮಿಶ್ರಣದಿಂದ ತುಂಬಿಸಿ.
ತೆಂಗು, ಸರ್ವಿಗೆ, ಅಡಕೆ ಮರಗಳನ್ನು ಬೆಂಬಲ ಗಿಡಗಳಾಗಿ ಬಳಸಬಹುದು.
ಮಾರುಕಟ್ಟೆ ಮತ್ತು ಲಾಭ :-
ವಿವಿಧ ಸ್ಥಳಗಳಿಗೆ ಹಾಗೂ ಬೇಡಿಕೆಗೆ ತಕ್ಕಂತೆ ಮಾರುಕಟ್ಟೆ ದರ ಇರುತ್ತದೆ ಪ್ರಸ್ತುತ ₹300-₹600/ಕೆಜಿ (ಗುಣಮಟ್ಟ ಮತ್ತು ಮಾರುಕಟ್ಟೆ ಅವಲಂಬಿಸಿ)
ಲಾಭ :-
1 ಹೆಕ್ಟೇರ್ನಲ್ಲಿ 3-4 ಲಕ್ಷ ರೂ. ವರೆಗೆ ಒಟ್ಟು ಆದಾಯ.
ನಿವ್ವಳ ಲಾಭ: 2-2.5 ಲಕ್ಷ ರೂ. (ಕಳೆದುಕೊಂಡ ಖರ್ಚುಗಳ ನಂತರ).
ವರ್ಷದಿಂದ ವರ್ಷಕ್ಕೆ ಲಾಭದಲ್ಲಿ ಹೆಚ್ಚು ಕಡಿಮೆ ಆಗುತ್ತಾ ಇರುತ್ತದೆ
ಒಟ್ಟಾರೆ ಹೇಳಬೇಕು ಅಂದ್ರೆ ರೈತರು ಈ ಕಾಳುಮೆಣಸು ಕೃಷಿಯನ್ನು ಮಿಶ್ರ ಬೇಸಾಯಕಾಗಿ ಮಾಡಿದರೆ ಖಂಡಿತ ಲಾಭವನ್ನು ಗಳಿಸಬಹದು.
Latest Post:-
- ರೈತರೇ ಗಮನಿಸಿ : ನಿಮ್ಮ ಖಾತೆಗೆ ಪಿಎಂ ಕಿಸಾನ್ ಯೋಜನೆಯ 2000 ರೂ ಹಣ ಬಂದಿದೆಯಾ ಈಗಲೇ ಚೆಕ್ ಮಾಡಿ…Kisan20
- ಬಂಗಾರದ ಬೆಲೆ ಭಾರಿ ಇಳಿಕೆ.. ಇಂದೇ ಖರೀದಿಸಿ ವರಮಹಾಲಕ್ಷ್ಮಿ ಹಬ್ಬದ ಫುಲ್ ಡಿಸ್ಕೌಂಟ್..
- ಶಿವಮೊಗ್ಗ ಅಡಿಕೆ ರೇಟ್ ಇಂದಿನ ಅಡಿಕೆ ಬೆಲೆ । ₹70,000 ಗಡಿ ದಾಟುವ ನಿರೀಕ್ಷೆ…!
- ಫ್ಲಿಪ್ಕಾರ್ಟ್ ಫ್ರೀಡಮ್ ಸೇಲ್ 2025 | Flipkart Freedom Sale
- ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) 2ಲಕ್ಷ | 20 ರೂ ವಾರ್ಷಿಕ Apply Now