ಹಲೋ ವೀಕ್ಷಕರೇ ಎಲ್ಲರಿಗೂ ನಮಸ್ಕಾರ ….ಕರ್ನಾಟಕ ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮವು ಸಮುದಾಯದ ಸದಸ್ಯರಿಗೆ 2025-26ನೇ ಸಾಲಿನಲ್ಲಿ ವಿವಿಧ ಸಾಲ ಮತ್ತು ಸಹಾಯಧನ ಯೋಜನೆಗಳನ್ನು ಘೋಷಿಸಿದೆ. ಈ ಯೋಜನೆಗಳು ಶಿಕ್ಷಣ, ಕೃಷಿ, ಸ್ವಯಂ ಉದ್ಯೋಗ ಮತ್ತು ವ್ಯವಸ್ಥಾಪನೆಗಳಿಗೆ ಆರ್ಥಿಕ ಸಹಾಯ ನೀಡುತ್ತದೆ.
ಈ ಯೋಜನೆ ಬಗ್ಗೆ ನಿಮಗೂ ಎಲ್ಲ ಅಮಾಹಿತಿ ಬೇಕು ಅಂದರೆ ಈ ಮಾಹಿತಿಯನ್ನು ಪೂರ್ತಿಯಾಗಿ ಕೊನೆ ತನಕ ಓದಿರಿ ಹಾಗೂ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ.
Veerashaiva Lingayat Loan Subsidy Scheme
ಈ ಯೋಜನೆಯ ಉದ್ದೇಶ :-
ಕರ್ನಾಟಕದಲ್ಲಿರುವ ವೀರಶೈವ ಲಿಂಗಾಯಿತರಿಗೆ ಅವರ ಸಮುದಾಯದಿಂದ ಸಹಾಯಧನವನ್ನು ನೀಡುತ್ತಿದ್ದು ನೀವು ಸಹ ಲಿಂಗಾಯಿತ ಸಮುದಾಯದವರಾಗಿದ್ದರೆ 4 ಲಕ್ಷದ ವರೆಗೆ ಸಹಾಯಧನವನ್ನು ಪಡೆದುಕೊಳ್ಳಬಹುದು ಇಂದೇ ಅರ್ಜಿ ಸಲ್ಲಿಸಬಹುದು ಅದರ ಬಗ್ಗೆ ಈ ಕೆಳಗೆ ನೋಡೋಣ ಬನ್ನಿ.
ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು?
ಹೌದು ಫ್ರಂಡ್ಸ್ ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೇಳಬವೊಂದಿಷ್ಟು ಅರ್ಹತೆಗಳು ಬೇಕಾಗುತ್ತವೆ ಅದರ ಬಗ್ಗೆ ಈ ಕೆಳಗೆ ಮಾಹಿತಿಯನ್ನು ನೀಡಲಗಿದ್ದು ಅದನ್ನು ಗಮನಿಸಿ ಅರ್ಜಿ ಸಲ್ಲಿಸಿ.
ಜಾತಿ: ವೀರಶೈವ/ಲಿಂಗಾಯಿತ (3B) ಸಮುದಾಯದವರು (ವಿಶ್ವಕರ್ಮ, ಉಪ್ಪಾರ, ಒಕ್ಕಲಿಗರಿಗೆ ಅನ್ವಯಿಸುವುದಿಲ್ಲ)
ಆದಾಯ: ಗ್ರಾಮೀಣ – ₹98,000/ವರ್ಷಕ್ಕಿಂತ ಕಡಿಮೆ, ನಗರ – ₹1.2 ಲಕ್ಷಕ್ಕಿಂತ ಕಡಿಮೆ
ವಯಸ್ಸು: 18 ವರ್ಷ ಮೇಲ್ಪಟ್ಟವರು
ದಾಖಲೆಗಳು: ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಆಧಾರ್, ಬ್ಯಾಂಕ್ ಖಾತೆ
ಇವು ಮೇಲೆ ಕೊಟ್ಟಿರುವಂಥ ಎಲ್ಲ ಅರ್ಹತೆ ಇದ್ದವರು ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವಿಧಾನ :-
ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೆಳಗಿನ ಹಂತವನ್ನು ಫಾಲೋ ಮಾಡುವುದರ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಸೇವಾ ಸಿಂಧು ಪೋರ್ಟಲ್ (sevasindhu.karnataka.gov.in)ಗೆ ಭೇಟಿ ನೀಡಿ ನಂತರ
“ವೀರಶೈವ ಲಿಂಗಾಯಿತ ನಿಗಮ ಸಾಲ ಯೋಜನೆ” ಆಯ್ಕೆಮಾಡಿ ನಂತರ
ಅಲ್ಲಿ ಕೇಳಿರುವ ಮಾಹಿತಿಯನ್ನು ತಪ್ಪಿಲ್ಲದೆ ನಮೂದಿಸಿ ನಂತರ
ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ನಂತರ
ಅರ್ಜಿ ಸಲ್ಲಿಸಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ
ಇಷ್ಟು ಮಾಡಿದರೆ ಸಾಕು ಈ ಯೋಜನೆಯ ಫಲಾನುಭವಿಗಳಾಗಬಹುದು.
ಅರ್ಜಿ ಸಲ್ಲಿಸಲು ಈ ಕೆಳಗೆ ಲಿಂಕ್ ಇದೆ ಅದರ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ.
ಇತರೆ ಪ್ರಮುಖ ಯೋಜನೆಗಳ ಬಗ್ಗೆ ಮಾಹಿತಿ ;-
ಪ್ರಮುಖ ಯೋಜನೆಗಳು:
- ಬಸವ ಬೆಳಗು ಯೋಜನೆ – ಉನ್ನತ ಶಿಕ್ಷಣಕ್ಕೆ ಸಾಲ (ಪದವಿ, PG, ವೃತ್ತಿಪರ ಕೋರ್ಸ್ಗಳು)
- ಜೀವಜಲ ಯೋಜನೆ – ಕೃಷಿಕರಿಗೆ ಬೋರ್ವೆಲ್, ಪಂಪ್ಸೆಟ್ಗಳಿಗೆ ಸಹಾಯಧನ
- ಕಾಯಕಕಿರಣ ಯೋಜನೆ – ಸ್ವಯಂ ಉದ್ಯೋಗಿಗಳಿಗೆ ವ್ಯಾಪಾರ/ಕೃಷಿ ಸಾಲ (₹50,000 ರಿಂದ ₹4 ಲಕ್ಷ ವರೆಗೆ)
- ಸ್ವಾತಂತ್ರ್ಯ ಅಮೃತ ಮಹೋತ್ಸವ ಯೋಜನೆ – ವಿಶೇಷ ಆರ್ಥಿಕ ಬೆಂಬಲ
- ಸ್ವಾವಲಂಬಿ ಸಾರಥಿ ಯೋಜನೆ – ಟ್ಯಾಕ್ಸಿ/ಆಟೋ ಖರೀದಿಗೆ ₹3 ಲಕ್ಷ ವರೆಗೆ ಸಹಾಯಧನ
ಈ ಎಲ್ಲ ಯೋಜನೆಗಳಬಗ್ಗೆ ಮುಂದಿನ ಪೋಸ್ಟ್ ಅಲ್ಲಿ ತಿಳಿಸಿಕೊಡ್ತಿನಿ.
ಕೊನೆಯ ದಿನಾಂಕ: ಜೂನ್ 30, 2025 (ಶೈಕ್ಷಣಿಕ ಸಾಲಕ್ಕೆ ಗಡುವಿಲ್ಲ)
ಇತರೆ ಸರ್ಕಾರಿ ಪ್ರಮುಖ ಯೋಜನೆಗಳ ಮಾಹಿತಿ ನೋಡಿ :-
- ಪಿಎಂ ಕಿಸಾನ್ ಯೋಜನೆಗೆ ₹12,000 ಸಹಾಯಧನ?
- ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ
- ಸುಕನ್ಯ ಸಮೃದ್ಧಿ ಯೋಜನೆ ಕೇಂದ್ರ ಸರ್ಕಾರಿ ಯೋಜನೆ
- ಕರ್ನಾಟಕ ರಾಜ್ಯದ ರೈತರಿಗಾಗಿ ಬೀಜದ ಭತ್ತ ಸಬ್ಸಿಡಿ ಯೋಜನೆ 2025